Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Saturday, January 30, 2016

BENDRE BIRTH DAY


ಜನವರಿ 31-ದ.ರಾ.ಬೇಂದ್ರೆ ಜನ್ಮ ದಿನ
ದತ್ತಾತ್ರೇಯ ರಾಮ ಚಂದ್ರ ಬೇಂದ್ರೆಯವರು 1896ರ ಜನವರಿ 31 ರಂದು ಧಾರವಾಡದ ವೈದಿಕ ಮನೆತನದಲ್ಲಿ ಜನಿಸಿದರು.ತಂದೆ ರಾಮ ಚಂದ್ರ,ತಾಯಿ ಅಂಬವ್ವ. ದ.ರಾ.ಬೇಂದ್ರೆಯವರು ಅಂಬಿಕಾ ತನಯ ದತ್ತ ಎಂಬ ಕಾವ್ಯ ನಾಮದೊಂದಿಗೆ ಕಥೆ,ಕವಿತೆಗಳನ್ನು ಬರೆಯುತ್ತಿದ್ದರು.ಅವರ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,ಇಳಿದು ಬಾ ತಾಯೆ ಇಳಿದು ಬಾ,ಭೃಂಗದ ಬನ್ನೇರಿ ಬಂತು ಕಲ್ಪನಾ ವಿಲಾಸ,ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ,ಮುಂತಾದ ಜನಪ್ರಿಯ ಕಾವ್ಯಗಳನ್ನು  ಬರೆದಿದ್ದಾರೆ.ಹಳಾದ ದಂಡ್ಯಾಗ,,ಗರಿ,ಸಖೀ ಗೀತ,ನಾದ ಲೀಲೆ,ಉಯ್ಯಾಲೆ,ನಾಕು ತಂತಿ ,ಮುಂತಾದ ಕೃತಿಗಳನ್ನು ಬರೆದಿದ್ದಾರೆ.1974ರಲ್ಲಿ ಅವರ ನಾಕುತಂತಿ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿತು.ತನಗೆ ಕಾವ್ಯವೇ ಜೀವನ ಎನ್ನುತ್ತಿದ್ದ ಬೇಂದ್ರದೆಯವರು 1981ರ ಅಕ್ಟೋಬರ್ 26ರಂದು ಇಹಲೋಕ ಯಾತ್ರೆ ಮುಗಿಸಿದರು. 

ಕುಷ್ಟ ರೋಗ ನಿರ್ಮೂಲನಾ ದಿನ



ಜನವರಿ 30 ಕುಷ್ಟ ರೋಗ ನಿರ್ಮೂಲನಾ ದಿನ

ಗಾಂಧೀಜಿಯವರು ತಮ್ಮ ಸಬರಮತಿ ಆಶ್ರಮದಲ್ಲಿ  ಕುಷ್ಟ ರೋಗಿಗಳ ಸೇವೆಯನ್ನು ಮಾಡುತ್ತಿದ್ದರು.ಕಳೆದ 6 ದಶಕಗಳಿಂದ ಕುಷ್ಟ ರೋಗ ನಿರ್ಮೂಲನೆಯಲ್ಲಿ ಸಾಕಷ್ಟು ಪ್ರಗತಿಯನ್ನು ಕಂಡಿದೆ.ಇನ್ನು ಸಂಪೂರ್ಣ ನಿರ್ಮೂಲನೆ ಮಾಡಲು ನಾವೆಲ್ಲರೂ ಪಣ ತೊಡ ಬೇಕಾಗಿದೆ.ಈ ನಿಟ್ಟಿನಲ್ಲಿ ಜನವರಿ 30ನ್ನು ಕುಷ್ಟ ರೋಗ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತಿದೆ.

Thursday, January 28, 2016

ಹುತಾತ್ಮರ ದಿನ

ಹುತಾತ್ಮರ ದಿನ
ಮಹಾತ್ಮಾ ಗಾಂಧೀಜೀಕೀ   ಜೈ
                                                        ಭಾರತ್ ಮಾತಾ ಕೀ  ಜೈ

METRIC MELA


ಚೇವಾರಿನಲ್ಲಿ ಗಣಿತದ ಮೆಟ್ರಿಕ್  ಮೇಳ

ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಟ್ಟದ ಗಣಿತ ಮೇಳ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.ಮೇಳವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಮಿತ್ತಡ್ಕ ಉದ್ಘಾಟಿಸಿ,ಗಣಿತ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರ,ವಿದ್ಯಾರ್ಥಿಗಳು ಗಣಿತದಲ್ಲಿ ಆಸಕ್ತಿಯನ್ನು ಬೆಳೆಸಿ ಇನ್ನಷ್ಟು ಕೊಡುಗೆಗಳನ್ನು ನೀಡ ಬೇಕೆಂದು ಕರೆಯಿತ್ತರು.ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್,ಎಲ್ಲಾ ಕ್ಷೇತ್ರದ ಬೆಳವಣಿಗೆಗೆ ಗಣಿತವು ಅಗತ್ಯವಾಗಿದ್ದು,ಗಣಿತ ಕಲಿಕೆಯು ಅನಿವಾರ್ಯವಾಗಿದೆ.ಗಣಿತವನ್ನು ಸರಳವಾಗಿ ಅರ್ಥೈಸಲು ಇಂತಹ ಶಿಬಿರಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.ಅಧ್ಯಾಪಿಕೆ ಸರಸ್ವತಿ ಶುಭ ಹಾರೈಸಿದರು.ಪ್ರಸಾದ್ ಸ್ವಾಗತಿಸಿದರು.ಪ್ರಮೀಳಾ ವಂದಿಸಿದರು.ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.ತದನಂತರ ಗಣಿತದ ವಿವಿಧ ಚಟುವಟಿಕೆಗಳನ್ನು ನೆರವೇರಿಸಲಾಯಿತು.ವಿದ್ಯಾರ್ಥಿಗಳು ತಯಾರಿಸಿದ ಹಸ್ತ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು.ಸಂಪನ್ಮೂಲ ವ್ಯಕ್ತಿಯಾಗಿ ವಿನೋದ್ ಚೇವಾರ್ ಸಹಕರಿಸಿದರು.





Monday, January 25, 2016

REPUBLIC DAY CELEBRATION


ಚೇವಾರಿನಲ್ಲಿ ಗಣರಾಜ್ಯೋತ್ಸವ ಆಚರಣೆ

ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವದಂದು ಪೈವಳಿಕೆ ಗ್ರಾಮ ಪಂಚಾಯತು ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರು ಧ್ವಜಾರೋಹಣ ನೆರವೇರಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಮಿತ್ತಡ್ಕ ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಸ್ವಾಗತಿಸಿ,ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಿಕ್ಷಕಿ ಸರಸ್ವತಿ ವಂದಿಸಿದರು.ವಿನೋದ್ ಚೇವಾರು ಕಾರ್ಯಕ್ರಮ ನಿರೂಪಿಸಿದರು.ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.ಸಿಹಿ ತಿಂಡಿ ವಿತರಿಸಲಾಯಿತು