Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Friday, December 23, 2016

CHRISTMAS CELEBRATION



Add captionಚೇವಾರಿನಲ್ಲಿ ಕ್ರಿಸ್ಮಸ್ ಆಚರಣೆ

Friday, December 16, 2016

KALOTHSAVA AWARD

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ಲಲಿತ ಗಾನದಲ್ಲಿ ಎ ಗ್ರೇಡ್,ಕನ್ನಡ ಭಾಷಣದಲ್ಲಿ ಎ ಗ್ರೇಡ್,ಕನ್ನಡ ಕಂಠಪಾಠದಲ್ಲಿ ಎ ಗ್ರೇಡ್,ಶಾಸ್ತ್ರೀಯ ಸಂಗೀತದಲ್ಲಿ ಬಿ ಗ್ರೇಡ್ ಪಡೆದ 4ನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿ ಎಸ್.

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ದೇಶ ಸಮೂಹ ಗೀತೆ ಹಾಡುವುದರಲ್ಲ್ಲಿ ಎ ಗ್ರೇಡ್ ಪಡೆದ ವಿದ್ಯಾರ್ಥಿನಿಯರು.
ಶ್ರೇಯ,ಸುಷ್ಮಿತ ಜಿ,ಆರ್,ಚಿನ್ಮಯಿ.ಎಸ್,ಅಮೃತ,ಅಕ್ಷತ,ಹಿತಶ್ರೀ

KALOTHSAVA AWARD

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಸಂಸ್ಕೃತ ಸಿದ್ಧರೂಪೋಚ್ಚಾರಣಂ ನಲ್ಲಿ ಎ ಗ್ರೇಡ್,ನಾಟಕದಲ್ಲಿ ಎ ಗ್ರೇಡ್,ಸಂಘ ಗಾನಂನಲ್ಲಿ ಎ ಗ್ರೇಡ್,ಸಂಸ್ಕ-ತ ನಾಟಕದಲ್ಲಿ ಬಿ ಗ್ರೇಡ್,ಕಥಾರಚನೆಯಲ್ಲಿ ಬಿ ಗ್ರೇಡ್,ಅಕ್ಷರ ಶ್ಲೋಕಂ ನಲ್ಲಿ ಸಿ ಗ್ರೇಡ್  ಮಿಥುನ್ ಪಿ.

KALOTHSAVA AWARD

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಸಂಸ್ಕೃತ ಕ್ವಿಜ್ ನಲ್ಲಿ ಎ ಗ್ರೇಡ್ನೊಂದಿಗೆ ತೃತೀಯ ಸ್ಥಾನ,ಸಿದ್ಧರೂಪೋಚ್ಛಾರಣಂ ನಲ್ಲಿ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನ,ಗಾನಾಲಾಪನಂ ನಲ್ಲಿ ಎ ಗ್ರೇಡ್,ಅಕ್ಷರ ಶ್ಲೋಕಂನಲ್ಲಿ ಬಿ ಗ್ರೇಡ್,ಸಂಸ್ಕ-ತ ನಾಟಕದಲ್ಲಿ ಬಿ ಗ್ರೇಡ್,ವಂದೇ ಮಾತರಂ ನಲ್ಲಿ ಬಿ ಗ್ರೇಡ್,ಕನ್ನಡ ಕಥಾ ರಚನದಲ್ಲಿ ಬಿ ಗ್ರೇಡ್,ಭಾಷಣದಲ್ಲಿ ಸಿಗ್ರೇಡ್ ಪಡೆದ 7ನೇ ತರಗತಿಯ ವಿದ್ಯಾರ್ಥಿನಿ ಜ್ಯೋತಿಕಾ ಸಿ.ಟಿ.

Kalothsava Award

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಸಂಸ್ಕೃತ ಪದ್ಯೋಚ್ಛಾರಣಂನಲ್ಲಿ ಎ ಗ್ರೇಡ್,ಗಾನಾಲಾಪನಂ ನಲ್ಲಿ ಎ ಗ್ರೇಡ್,ಸಂಘ ಗಾನಂ ನಲ್ಲಿ ಎ ಗ್ರೇಡ್,ಕನ್ನಡ ಕಂಠಪಾಠದಲ್ಲಿ ಎ ಗ್ರೇಡ್,ನಾಟಕದಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ,ಇಂಗ್ಲಿಷ್ ಕಂಠಪಾಠದಲ್ಲಿ  ಸಿ ಗ್ರೇಡ್,ಕವಿತಾ ರಚನೆಮತ್ತು ಸಂಸ್ಕೃತ ಕವಿತಾ ರಚನೆಯಲ್ಲಿ ಸಿ ಗ್ರೇಡ್ ಪಡೆದ 6ನೇ ತರಗತಿಯ ಗೌತಮ್ ಎಸ್



ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಸ್ಕೃತ ಸಮಸ್ಯಾಪೂರ್ಣಂನಲ್ಲಿ ಬಿ ಗ್ರೇಡ್ನಲ್ಲಿ ತೃತೀಯ,ಸಂಸ್ಕೃತ ಪದ್ಯೋಚ್ಛರಣಂನಲ್ಲಿ ಬಿ ಗ್ರೇಡ್,ಪ್ರಭಾಷಣಂನಲ್ಲಿ ಬಿ ಗ್ರೇಡ್ ಪಡೆದ ಪೂರ್ಣಿಮಾ ಕೆ.ಯಂ.

AWARDS

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಸಂಸ್ಕೃತ ಸಂಘ ಗಾನದಲ್ಲಿ ಎ ಗ್ರೇಡ್ ಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳು.

ಅನುಜಾಕ್ಷಿ.ಕೆ,ಪೂರ್ಣಿಮಾ.ಕೆ.ಯಂ,ನವ್ಯಶ್ರೀ ಯಂ.,ವಿಂದ್ಯಾ.ಕೆ.ಮಿಥುನ್.ಪಿ.ಪ್ರಜ್ವಲ್.ಕೆ,ಗೌತಮ್.ಎಸ್.

Thursday, December 15, 2016

AWARDS


ಮಂಜೇಶ್ವರ ಉಪಜಿಲ್ಲಾ ಮಟ್ಟದ ಉರ್ದು ಸಮೂಹ ಗಾನ ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ನಮ್ಮ ಶಾಲಾ ವಿದ್ಯಾರ್ಥಿನಿಯರು
ಫಾತಿಮತ್ ಜಲೀಲ,ಆಯಿಶತ್ ಮುಫೀದ,ಸಬಾನ,ಅಝೀಬಾ,ಆಯಿಷತ್ ರಷೀದ,ಶಮ್ಲ

Tuesday, December 13, 2016

HARITHA KERALA PROGRAMME

ಚೇವಾರು ಶಾಲೆಯಲ್ಲಿ ಹಸಿರು ಕೇರಳ ಅಭಿಯಾನಕ್ಕೆ ಚಾಲನೆ
ಕೇರಳ ಸರಕಾರದ ಮಹತ್ವದ ಯೋಜನೆಯಾದ ಹಸಿರು ಕೇರಳಅಭಿಯಾನದ ಅಂಗವಾಗಿ,ದಿನಾಂಕ 8-12-2016ರಂದುಶಾಲೆಯಲ್ಲಿ ವಿಶೇಷ ಎಸಂಬ್ಲಿಯನ್ನು ಏರ್ಪಡಿಸಲಾಯಿತು.ಹಸಿರು ಕೇರಳ ಯೋಜನೆಯ ಮಹತ್ವವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಮ್ ಭಟ್ ವಿವರಿಸಿದರು.ಸ್ಕೌಟ್ ಅಧ್ಯಾಪಕರಾದ ವಿನೋದ್,ಘೋಷಣಾ ವಾಕ್ಯಗಳನ್ನು ಹೇಳಿದರು.ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣಾ ಪ್ರತಿಜ್ಞೆಯನ್ನು ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಕೈಗೊಂಡರು.

ಶಾಲಾ ಎಸೆಂಬ್ಲಿಯಲ್ಲಿ ಪರಿಸರ ಸಂರಕ್ಷಣಾ ಪ್ರತಿಜ್ಞೆ

ಹಸಿರು ಕೇರಳ ಜಾಥಾ
ಹಸಿರು ಕೇರಳ ಯೋಜನೆಯ ಅಂಗವಾಗಿ ,ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಕರಿಂದ ಶಿಕ್ಷಕರಿಂದ ಮೆರವಣಿಗೆಯನ್ನು ಏರ್ಪಡಿಸಲಾಯಿತು. ಮುಖ್ಯ ಶಿಕ್ಷಕರಾದ ಶ್ಯಾಮ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪರಿಸರ ಸಂರಕ್ಷಣಾ ಘೋಷಣೆ ಹಾಗೂ ವಿವಿಧ ಪ್ಲಕಾರ್ಡ್ ಗಳಿಂದ ಪರಿಸರ ಸಂರಕ್ಷಣೆ ಹಾಗೂ ಜಲ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
ಪರಿಸರ ಸಂರಕ್ಷಣಾ ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು

ಹಸಿರು ಕೇರಳದ ಅಂಗವಾಗಿ ವಿಶೇಷ ಸ್ವಚ್ಛತಾ ಕಾರ್ಯಕ್ರಮ
ಹಸಿರು ಕೇರಳ ಯೋಜನೆಯ ಅಂಗವಾಗಿ ,ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಕರಿಂದ ಶಿಕ್ಷಕರಿಂದ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು.ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳು ನೇತೃತ್ವವನ್ನು ವಹಿಸಿದರು.

AWARDS

ಪ್ರತಿಭಾನ್ವಿತರು


ಧರ್ಮತ್ತಡ್ಕ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ, ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ನಾಟಕ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಗೀತಾಂಜಲಿ ಕೆ.ವಿ.,ಚೈತನ್ಯ.ಯಂ,ಪೂರ್ಣಿಮಾ ಕೆ.ಯಂ,ದೃಶ್ಯ ಕಿರಣ್.ಕೆ,ಮಿಥುನ್.ಪಿ,ಸುಮಂತ್.ಪಿ,ಗೌತಮ್.ಎಸ್ ಹಾಗೂ ತುಷಾರ್.ಯಂ.
Add caption
 ಧರ್ಮತ್ತಡ್ಕ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ,ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ದೇಶ ಭಕ್ತಿ ಗೀತೆ ಹಾಡುವ ಸ್ಪರ್ಧೆಯಲ್ಲಿ ಎ ಗ್ರೇಡ್  ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಅನುಜಾಕ್ಷಿ,ಪೂರ್ಣಿಮಾ,ನವ್ಯಶ್ರೀ,ವಿಂದ್ಯಾ.ಕೆ,ಮಿಥುನ್,ಪ್ರಜ್ವಲ್,ಗೌತಮ್

Sunday, October 30, 2016

CELEBRATION OF EKATA DIVAS

ರಾಷ್ಟ್ರೀಯ ಏಕತಾ ದಿನಾಚರಣೆ 
ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭ ಬಾಯ್ ಪಟೇಲರ ಜನ್ಮ ದಿನವನ್ನು,ಶಾಲೆಯಲ್ಲಿ ವಿಶೇಷ ಎಸೆಂಬ್ಲಿ ನಡೆಸಿ ಸರ್ದಾರ್ ವಲ್ಲಭ ಬಾಯ್ ಪಟೇಲರ ಜೀವನ ಚರಿತ್ರೆಯನ್ನು ವಿವರಿಸಲಾಯಿತು.ರಾಷ್ಟ್ರೀಯ ಏಕತೆಯನ್ನು ಉಳಿಸಿ ರಕ್ಷಿಸುವ ಕುರಿತಾದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.

Wednesday, October 26, 2016

AWARDS IN MATHS SEMINAR

ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ಸೆಮಿನಾರ್ ನಲ್ಲಿ ತೃತೀಯ ಸ್ಥಾನ ಪಡೆದ ಜ್ಯೋತಿಕಾ ಸಿ.ಟಿ.

AWARDS IN IT FAIR

ಸರಕಾರಿ ಹಯರ್ ಸೆಕೆಂಡರಿ ಶಾಲೆ ಪೈವಳಿಕೆ(ಕಾಯರ್ಕಟ್ಟೆ)ಯಲ್ಲಿ ಜರಗಿದ  ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಂಪ್ಯೂಟರ್  ಟೈಪಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಪ್ರಶಸ್ತಿ ಪಡೆದ 7ನೇ ತರಗತಿ ವಿದ್ಯಾರ್ಥಿ ಅಬ್ದುಲ್ ನವಾಸ್.ಒ

AWARDS IN I.T.FAIR

ಸರಕಾರಿ ಹಯರ್ ಸೆಕೆಂಡರಿ ಶಾಲೆ ಪೈವಳಿಕೆ(ಕಾಯರ್ಕಟ್ಟೆ)ಯಲ್ಲಿ ಜರಗಿದ  ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಂಪ್ಯೂಟರ್  ಡಿಜಿಟಲ್ ಪೈಂಟಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಪ್ರಶಸ್ತಿ ಪಡೆದ 7ನೇ ತರಗತಿ ವಿದ್ಯಾರ್ಥಿ ತುಷಾರ್.ಯಂ.

AWARDS IN DASARA NAADA HABBA

ಪೈವಳಿಕೆ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ದಸರಾ ನಾಡಹಬ್ಬ ಸಮೂಹ ಗಾನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಬಹುಮಾನ ಗಳಿಸಿದ  ನಮ್ಮ ಶಾಲಾ ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿಯರು.

Tuesday, October 25, 2016

AWARDS IN DASARA NAADA HABBA,2016-17

ಪೈವಳಿಕೆ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ದಸರಾ ನಾಡಹಬ್ಬ ಸಮೂಹ ಗಾನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಬಹುಮಾನ ಗಳಿಸಿದ  ನಮ್ಮ ಶಾಲಾ U.P.ವಿದ್ಯಾರ್ಥಿನಿಯರು.
ಆಯಿಷತ್ ಅಜೀಬಾ,ಪೂರ್ಣಿಮಾ,ಗೀತಾಂಜಲಿ,ಅನುಜಾಕ್ಷಿ,ನವ್ಯಶ್ರೀ,ಸ್ವಾತಿ ಹಾಗೂ ವಿಂದ್ಯಾ.ಕೆ.

Saturday, October 15, 2016

AWARDS

ದೇಶಾಭಿಮಾನಿ ಪತ್ರಿಕೆಯ ಆಶ್ರಯದಲ್ಲಿ ಜರಗಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಉಪಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ ನಮ್ಮ ಶಾಲಾ ಪುಟಾಣಿಗಳು
Jyothika C.TVII

Shreya IV

Chinmayi IV

GOUTHAM S VI





MATHEMATICS SEMINAR AWARD

ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ಸೆಮಿನಾರ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಚೇವಾರು ಶಾಲಾ ವಿದ್ಯಾರ್ಥಿನಿ ಜ್ಯೋತಿಕಾ ಸಿ.ಟಿ.

SCHOOL SPORTS DAY,2016-17

ಶಾಲಾ ಮಟ್ಟದ ಕ್ರೀಡಾ ಕೂಟ,2016-17




Sunday, October 2, 2016

GANDHI JAYANTHI CELEBRATION

ಚೇವಾರಿನಲ್ಲಿ ಗಾಂಧೀ ಜಯಂತಿ ಆಚರಣೆ




ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಗಾಂಧೀ ಜಯಂತಿಯನ್ನು ವಿವಿಧ ಕಾರ್ಯಕ್ತಮಗಳೊಂದಿಗೆ ಆಚರಿಸಲಾಯಿತು.ಕಾರ್ಯಕ್ರಮವಲ್ಲು ಉದ್ಘಾಟಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್,ಗಾಂಧೀಜಿಯವರು ಅನುಸರಿಸಿದ ಸತ್ಯ,ಶಾಂತಿ ಅಹಿಂಸೆಯನ್ನು ನಮ್ಮ ಜೀವನದಲ್ಲಿ ಅನುಸರಿಸುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಬಹುದೆಂದು ಅಭಿಪ್ರಾಯ ಪಟ್ಟರು.ಶಿಕ್ಷಕ ಪ್ರಸಾದ್ ರೈ,ಪ್ರಮೀಳಾ,ಪುಷ್ಪಲತಾ ಗಾಂಧೀಜಿಯವರ ಜೀವನ ಚರಿತ್ರೆಯನ್ನು ವಿವರಿಸಿದರು.ಬಳಿಕ ಸರ್ವಧರ್ಮ ಪ್ರಾರ್ಥನೆ,ಗಾಂಧೀಜಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ,ಪರಿಸರ ಶುಚೀಕರಣಕ್ಕೆ ಚಾಲನೆ  ಒದಗಿಸಲಾಯಿತು.ಶಿಕ್ಷಕಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.ರವಿಕುಮಾರ್ ವಂದಿಸಿದರು.

Monday, September 26, 2016

AWARDS

ಹೆದ್ದಾರಿ ಎ.ಯು.ಪಿ.ಶಾಲೆಯಲ್ಲಿ ಜರಗಿದ 2 ದಿನಗಳ ಸಂಸ್ಕೃತ ಶಿಬಿರದಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ ಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳು.


Monday, September 19, 2016

SCHOOL GARDEN



HELPING HAND

ಚೇವಾರಿನಲ್ಲಿ ಜೀವ ಕಾರುಣ್ಯಪದ್ಧತಿ ಅಂಗವಾಗಿ ಓಣಂ ಕಿಟ್ ವಿತರಣೆ




ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬಾಚರಣೆಯ ಅಂಗವಾಗಿ,ಶಾಲಾ ವಿದ್ಯಾರ್ಥಿಗಳಿಂದ,ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಓಣಂ ಕಿಟ್ ಗಳನ್ನು ವಿತರಿಸಲಾಯಿತು.ಕಾರ್ಯಕ್ರಮವನ್ನು ಪೈವಳಿಕೆ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಭಾರತಿ.ಜೆ,ಶೆಟ್ಟಿ ಉಧ್ಘಾಟಿಸಿ,ಕಿಟ್ ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಪೈವಳಿಕೆ ಪಂಚಾಯತು ಸದಸ್ಯರಾದ ಹರೀಶ್ ಬೊಟ್ಟಾರಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕುಮಾರ ಸುಬ್ರಹ್ಮಣ್ಯ, ಶಾಲಾ ಮುಖ್ಯ ಶಿಕ್ಷಕರಾದ ಶ್ಯಾಮ ಭಟ್ ಉಪಸ್ಥಿತರಿದ್ದರು.