Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, February 23, 2015

NEWSPAPER REPORT


ಜಾನಪದ ಪರಿಷತ್ತು ಕರ್ನಾಟಕ -ಗಡಿನಾಡ ಘಟಕದವತಿಯಿಂದ ನಮ್ಮ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದ ಪತ್ರಿಕಾ ವರದಿ
ವಿಜಯ ಕರ್ನಾಟಕ

ಹೊಸ ದಿಗಂತ

JAANAPADA SANCHAARA PROGRAMME

ಜಾನಪದ ಪರಿಷತ್ತು ಕರ್ನಾಟಕ ಗಡಿನಾಡ ಘಟಕದ ವತಿಯಿಂದ ಶಾಲಾ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳು ಜರಗಿದವು.










Sunday, February 22, 2015

WORLD LANGUAGE DAY


ಫೆಬ್ರವರಿ-21 ಲೋಕ ಮಾತೃ ಭಾಷಾ ದಿನ

ಜಗತ್ತಿನಲ್ಲಿ ಸಸ್ಯ ಪ್ರಭೇದಗಳು,ಜೀವಿಗಳು ಅಳಿವಿನಂಚಿಗೆ ಸಾಗುತ್ತಿರುವಂತೆ,ಅನೇಕ ಭಾಷೆಗಳೂ ಅವನತಿಯನ್ನು ಕಂಡು ನಶಿಸಿ ಹೋಗುತ್ತಿವೆ.ಜಾಗತೀಕರಣದ ಭರಾಟೆಯಲ್ಲಿ ಜಗತ್ತು ಕಿರಿದಾಗಿದ್ದು,ಅನೇಕ ಮಾತೃ ಭಾಷೆಗಳ ನಾಶಕ್ಕೆ ನಾಂದಿ ಹಾಡಿವೆ.ಅನೇಕ ವರ್ಷಗಳ ಹಿಂದೆ ಜಗತ್ತಿನಲ್ಲಿ ಸುಮಾರು 8000ದಷ್ಟು ವಿವಿಧ  ಭಾಷೆಗಳಿದ್ದುವು.ಈಗ ಅವುಗಳ ಸಂಖ್ಯೆ 6500ಕ್ಕೆ ಇಳಿದಿರುವುದು ಆತಂಕಕ್ಕೆ ಈಡುಮಾಡಿದೆ.ಇವುಗಳಲ್ಲಿ ಅರ್ಧದಷ್ಟು ಭಾಷೆಗಳು ನಶಿಸುವ ಹಂತದಲ್ಲಿದೆ.ವಿಶ್ವದಲ್ಲಿ ಪ್ರತಿ 2 ವಾರಕ್ಕೊಮ್ಮೆ ಒಂದು ಭಾಷೆ ನಶಿಸಿಹೋಗುತ್ತಿದೆ ಎಂಬುದು ಅಧ್ಯಯನ ವರದಿ.ಭಾಷೆಯು ಸಮಾಜದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.ಇದು ಸಂವಹನಕ್ಕೆ ಮಾತ್ರವಲ್ಲದೆ,ಒಂದು ಸಂಸ್ಕೃತಿಯನ್ನು ಬಿಂಬಿಸಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.ಭಾಷೆಯು ಸಮಾಜದ ಜನ ಸಮೂಹದ ಸಂಸ್ಕೃತಿ,ಚರಿತ್ರೆ,ವಂಶ ಪಾರಂಪರ್ಯವನ್ನು ನಿರ್ಧರಿಸುತ್ತದೆ.ಒಂದು ಭಾಷೆಯ ಅಳಿವು,ಒಂದು ಸಂಸ್ಕೃತಿ ಮತ್ತು ಪರಂಪರೆಯ ನಾಶವಾಗಿದೆ.ವಿನಾಶದ ಅಂಚಿಗೆ ತಲುಪಿದ ಭಾಷೆಯನ್ನು ಉಳಿಸುವ ಮೂಲಕ ಒಂದು ಸಂಪ್ರದಾಯವನ್ನು ಉಳಿಸಬಹುದು.ಯುನೆಸ್ಕೋ ಫೆಬ್ರವರಿ-21 ಲೋಕ ಮಾತೃ ಭಾಷಾ ದಿನವನ್ನಾಗಿ ಆಚರಿಸುವ ಮೂಲಕ ಜನರಲ್ಲಿ ಜಾಗೃತಿಯನ್ನು ಉಂಟುಮಾಡುತ್ತಿದೆ.

REPORT OF MATHS CAMP


ಗಣಿತ ಶಿಬಿರ-2014-15ರ ವರದಿ

ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು

   ದಿನಾಂಕ 20-02-2015 ರಂದು, ಯು.ಪಿ. ವಿಭಾಗದ ಗಣಿತ ಶಿಬಿರವು ಬೆಳಿಗ್ಗೆ 9.30ಕ್ಕೆ ಸಭಾ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ಪ್ರಾರ್ಥನೆಯ ನಂತರ ಅತಿಥಿಗಳನ್ನು ಶ್ರೀಮತಿ ರಾಜೇಶ್ವರಿ ಸ್ವಾಗತಿಸಿದರು. ಶಿಬಿರವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪರಮೇಶ್ವರ ಪಾವಲುಕೋಡಿ ಉದ್ಘಾಟಿಸಿ,ಗಣಿತದಲ್ಲಿ ಆಸಕ್ತಿ ಬೆಳೆಸಲು ಇಂತಹ ಶಿಬಿರಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಶ್ಯಾಮ ಭಟ್,ಶಿಬಿರದ ಮಹತ್ವವನ್ನು ವಿವರಿಸಿದರು.ಹಿರಿಯ ಅಧ್ಯಾಪಿಕೆ ಸರಸ್ವತಿ,ಗಣಿತವು ಮಾನವನ ಮಾನಸಿಕ ಕ್ರಿಯೆಗಳಾದ ವಿಚಾರ,ತರ್ಕ,ಅನುಮಾನ,ಏಕಾಗ್ರತೆ ಮುಂತಾದವುಗಳನ್ನುನಿರೂಪಿಸುವ ವ್ಯವಸ್ಥಿತ ಶಾಸ್ತ್ರವಾಗಿದ್ದು,ವಿದ್ಯಾರ್ಥಿಗಳು ಇದರಲ್ಲಿ ಆಸಕ್ತಿ ಬೆಳೆಸಬೇಕೆಂದು ಕರೆ ಕೊಟ್ಟರು.ಸ್ಟಾಫ್ ಕಾರ್ಯದರ್ಶಿ ವಿನೋದ್ ಗಣಿತ ಕಲಿಕೆಯಲ್ಲಿ ತಮ್ಮ ಅನುಭವವನ್ನುತಿಳಿಸಿದರು. ರವಿಕುಮಾರ್ ವಂದಿಸಿದರು.ಪ್ರಮೀಳಾ,ಪ್ರಸಾದ್ ರೈ,ಪುಷ್ಪಲತಾ, ವಿಜಯನ್ ಸಹಕರಿಸಿದರು.
ಆರಂಭದಲ್ಲಿ ಶಿಬಿರ ಗೀತೆ ಹಾಡಿದ ನಂತರ ಯು.ಪಿ.ವಿಭಾಗದ ಎಲ್ಲಾ ವಿದ್ಯಾರ್ಥಿಗಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ,ವಿವಿಧ ಗುಂಪುಗಳನ್ನಾಗಿ ಮಾಡಲಾಯಿತು.ಗುಂಪುಗಳಿಗೆ ರಾಮಾನುಜನ್,ಭಾಸ್ಕರಾಚಾರ್ಯ,ಪೈಥಗೋರಸ್,ಆರ್ಯಭಟ,ಶಕುಂತಲಾ ದೇವಿ,ಯೂಕ್ಲಿಡ್,ಆರ್ಕಿಮಿಡೀಸ್ ಮುಂತಾದ ಹೆಸರುಗಳನ್ನು ಚೀಟಿ ಎತ್ತುವ ಮೂಲಕ ಕೊಡಲಾಯಿತು.ಎಲ್ಲಾ ಗುಂಪುಗಳಿಗೂ ಚಾರ್ಟ್,ಬಣ್ಣದ ಬಟ್ಟೆ ತುಂಡುಗಳನ್ನು ನೀಡಿ ನಿಖರವಾದ ಅಳತೆಗಳಲ್ಲಿ ವೃತ್ತಾಕಾರದ ಬ್ಯಾಜ್ ಗಳನ್ನು ನಿರ್ಮಿಸುವಂತೆ ಸೂಚಿಸಲಾಯಿತು.ನಿಗದಿತ ಸಮಯದಲ್ಲಿ ತಮ್ಮ ಚಟುವಟಿಕೆಯನ್ನು ಪೂರ್ಣಗೊಳಿಸಿದರು.ನಿಖರವಾದ ಅಳತೆ,ಉತ್ಪನ್ನದ ಸೌಂದರ್ಯದ ಮೌಲ್ಯಮಾಪನ ಮಾಡಿ ಅಂಕಗಳನ್ನು ಕೊಡಲಾಯಿತು.ತಾವೇ ತಯಾರಿಸಿದ ಬ್ಯಾಜನ್ನು ಧರಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು.ಚಹಾ ವಿರಾಮದ ನಂತರ ಅಶ್ವ ಮೇಧ ಎಂಬ ಸ್ಪರ್ಧೆಯಲ್ಲಿ ಗುಂಪಿನಿಂದ ಒಬ್ಬನನ್ನು/ಳನ್ನು,ಆರಿಸಿ ಅವರ ಬೆನ್ನ ಹಿಂದೆ ಗಣಿತಕ್ಕೆ ಸಂಬಂಧಿಸಿದ ವಿಷಯವನ್ನೊಳಗೊಂಡ ಚೀಟಿ ಅಂಟಿಸಲಾಯಿತು.10 ಪ್ರಶ್ನೆಗಳನ್ನು ಕೇಳುವ ಮೂಲಕ ಬೆನ್ನ ಹಿಂದಿರುವ ಪದ ಯಾವುದು ಎಂದು ಹೇಳ ಬೇಕಾದುದು ಅವರಿಗಿರುವ ಸವಾಲು.ಇದನ್ನು ಯಶಸ್ವಿಯಾಗಿ ಪೂರೈಸಿದರು.ತದ ನಂತರ ಗುಂಪುಗಳಲ್ಲಿ ಟ್ಯಾನ್ ಗ್ರಾಮ್ ನಿರ್ಮಿಸಿದರು.ಭೋಜನ ವಿರಾಮದ ನಂತರ ಕೆರೆ ದಡ ಆಟವನ್ನು ಸಮ ಸಂಖ್ಯೆ,ವಿಷಮ ಸಂಖ್ಯೆಗಳನ್ನುಪಯೋಗಿಸಿ ಆಡಲಾಯಿತು.ನಂತರ ಪ್ರತಿ ಗುಂಪುಗಳಿಗೆ ಒಂದೇ ಗಾತ್ರದ ಎರಡೆರಡು ಚೌಕ ಗಳನ್ನು ನೀಡಿ,ಅವುಗಳನ್ನು ಸೇರಿಸಿ ದೊಡ್ಡ ಚೌಕ ನಿರ್ಮಿಸುವಂತೆ ಸೂಚಿಸಲಾಯಿತು.ಮಕ್ಕಳು ವಿವಿಧ ರೀತಿಗಳಲ್ಲಿ ಕತ್ತರಿಸಿ ನೋಡಿ ಸೇರಿಸಿ ಕೊನೆಗೂ ಯಶಸ್ವಿಯಾದರು.ಇದೇ ರೀತಿಯಲ್ಲಿ ವ್ಯತ್ಯಸ್ತ ಗಾತ್ರಗಳ ಚೌಕಗಳನ್ನು ನೀಡಿ ಪುನರಾವರ್ತಿಸಲಾಯಿತು.ನಂತರ ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ ,ಸಂಖ್ಯಾ ಆಟವನ್ನು ಆಡಿಸಲಾಯಿತು.ಚಹಾ ವಿರಾಮದ ನಂತರ ಮೆಮೋರಿ ಟೆಸ್ಟ್ ಆಟದಲ್ಲಿ, ಗಣಿತದ ವಿವಿಧ ವಸ್ತುಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿ,ನಂತರ ನೆನಪಿಸಿ ಅವುಗಳ ಹೆಸರನ್ನು ಬರೆದರು.ಶಿಬಿರದ ಕೊನೆಗೆ ತಮ್ಮ ತಮ್ಮ ಅನುಭವಗಳನ್ನು ಬರೆದರು.ಪ್ರತಿ ಗುಂಪುಗಳು ಪ್ರತಿ ಚಟುವಟಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಘೋಷಿಸಲಾಯಿತು.

 ಗಣಿತೋತ್ಸವದ ಸಮಾರೋಪ ಸಮಾರಂಭ

ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ಗಣಿತೋತ್ಸವದ ಅಂಗವಾಗಿ ನಡೆಸಲ್ಪಟ್ಟ ಗಣಿತ ಶಿಬಿರ ಹಾಗೂ ಮೆಟ್ರಿಕ್ ಮೇಳಗಳ ಸಮಾರೋಪ ಸಮಾರಂಭದ, ಅಧ್ಯಕ್ಷ ಸ್ಥಾನವನ್ನು ಸ್ಕೌಟ್ ಅಧ್ಯಾಪಕರಾದ ಶ್ರೀ ವಿನೋದ್ ವಹಿಸಿ,ವಿದ್ಯಾರ್ಥಿಗಳು ತಯಾರಿಸಿದ ಗಣಿತ ಚಿಗುರು ಎಂಬ ಮ್ಯಾಗಜಿನ್ ಬಿಡುಗಡೆಗೊಳಿಸಿದರು.ಹಿರಿಯ ಅಧ್ಯಾಪಿಕೆ ಶ್ರೀಮತಿ ಸರಸ್ವತಿ ಶಿಬಿರದಲ್ಲಿ ವಿದ್ಯಾರ್ಥಿಗಳು ತೋರಿದ ಆಸಕ್ತಿಯ ಕುರಿತು ವಿವರಿಸಿದರು.ಸಂಪನ್ಮೂಲ ವ್ಯಕ್ತಿ ರವಿ ಕುಮಾರ್ ಶಿಬಿರದಿಂದಾದ ಪ್ರಯೋಜನದ ಕುರಿತು ತಿಳಿಸಿದರು.ವಿದ್ಯಾರ್ಥಿಗಳು ಶಿಬಿರದ ಕುರಿತಾದ ತಮ್ಮ ಅನುಭವಗಳನ್ನು ಹಂಚಿಕೊಂಡರು.ಪ್ರಸಾದ್ ರೈ ಸ್ವಾಗತಿಸಿದರು.ಶ್ರೀಮತಿ ರಾಜೇಶ್ವರಿ ವಂದಿಸಿದರು. ಶ್ರೀಮತಿ ಪುಷ್ಪ ಲತಾ ಕಾರ್ಯಕ್ರಮ ನಿರೂಪಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕ ಶ್ರೀ ರವಿಕುಮಾರ್, ಶ್ರೀ ವಿನೋದ್.ಕೆಶ್ರೀಮತಿರಾಜೇಶ್ವರಿ.ಬಿ  ಶಿಬಿರವನ್ನು ನಿರ್ವಹಿಸಿದರು.

MATHEMATICS CAMP


ಚೇವಾರಿನಲ್ಲಿ ಗಣಿತೋತ್ಸವ


ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ, ಗಣಿತೋತ್ಸವದ ಅಂಗವಾಗಿ, ಗಣಿತ ಶಿಬಿರ ಹಾಗೂ ಮೆಟ್ರಿಕ್ ಮೇಳ ಇತ್ತೀಚೆಗೆ ಜರಗಿತು.ಶಿಬಿರವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪರಮೇಶ್ವರ ಪಾವಲುಕೋಡಿ ಉದ್ಘಾಟಿಸಿ,ಗಣಿತದಲ್ಲಿ ಆಸಕ್ತಿ ಬೆಳೆಸಲು ಇಂತಹ ಶಿಬಿರಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಶ್ಯಾಮ ಭಟ್,ಶಿಬಿರದ ಮಹತ್ವವನ್ನು ವಿವರಿಸಿದರು.ಹಿರಿಯ ಅಧ್ಯಾಪಿಕೆ ಸರಸ್ವತಿ,ಗಣಿತವು ಮಾನವನ ಮಾನಸಿಕ ಕ್ರಿಯೆಗಳಾದ ವಿಚಾರ,ತರ್ಕ,ಅನುಮಾನ,ಏಕಾಗ್ರತೆ ಮುಂತಾದವುಗಳನ್ನುನಿರೂಪಿಸುವ ವ್ಯವಸ್ಥಿತ ಶಾಸ್ತ್ರವಾಗಿದ್ದು,ವಿದ್ಯಾರ್ಥಿಗಳು ಇದರಲ್ಲಿ ಆಸಕ್ತಿ ಬೆಳೆಸಬೇಕೆಂದು ಕರೆ ಕೊಟ್ಟರು.ಸ್ಟಾಫ್ ಕಾರ್ಯದರ್ಶಿ ವಿನೋದ್,ವಿದ್ಯಾರ್ಥಿಗಳು ತಯಾರಿಸಿದ ಗಣಿತ ಚಿಗುರು ಎಂಬ ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.ಶಿಬಿರದಲ್ಲಿ ಬ್ಯಾಜ್ ತಯಾರಿ,ಗಣಿತ ಮಾದರಿಗಳ ನಿರ್ಮಾಣ,ವಸ್ತುಗಳನ್ನು ನಿಖರವಾಗಿ ಅಳೆಯುವ ವಿಧಾನ,ಸಂಖ್ಯಾ ಆಟ,ಗಣಿತ ಉತ್ಪನ್ನಗಳ ಪ್ರದರ್ಶನ,ಒರಿಗಾಮಿ,ಟ್ಯಾನ್ ಗ್ರಾಮ್ ನಿರ್ಮಾಣ,ಗಣಿತ ಶಾಸ್ತ್ರಜ್ಞರ ಪರಿಚಯ, ಮುಂತಾದ ಚಟುವಟಿಕೆಗಳನ್ನು ನೆರವೇರಿಸಲಾಯಿತು.ಅಧ್ಯಾಪಿಕೆ ರಾಜೇಶ್ವರಿ ಸ್ವಾಗತಿಸಿದರು.ರವಿಕುಮಾರ್ ವಂದಿಸಿದರು.ಪ್ರಮೀಳಾ,ಪ್ರಸಾದ್ ರೈ,ಪುಷ್ಪಲತಾ, ವಿಜಯನ್ ಸಹಕರಿಸಿದರು.

Friday, February 20, 2015

GANITHOTHSAVA-2014-15

 ಗಣಿತ ಶಿಬಿರ-ಮೆಟ್ರಿಕ್ ಮೇಳ-2014-15
ಗಣಿತೋತ್ಸವ 2014-15ರ ಅಂಗವಾಗಿ ಯು.ಪಿ.ವಿಭಾಗದ ಗಣಿತ ಶಿಬಿರ ಹಾಗೂ ಎಲ್.ಪಿ.ವಿಭಾಗದ ಮೆಟ್ರಿಕ್ ಮೇಳ ಶಾಲಾ ಸಭಾಂಗಣದಲ್ಲಿ 20-2-2015ರಂದು ಜರಗಿತು
ಉದ್ಘಾಟನಾ ಸಮಾರಂಭ-ಪ್ರಾರ್ಥನೆಯೊಂದಿಗೆ ಆರಂಭ

ನಿರೂಪಣೆ-ವಿನೋದ್ ಮಾಸ್ಟರ್ ರಿಂದ

ಪಿ.ಟಿ.ಎ ಅಧ್ಯಕ್ಷ ಪರಮೇಶ್ವರ ಪಾವಲು ಕೋಡಿಯವರಿಂದ ಉದ್ಘಾಟನಾ ಭಾಷಣ


ಶ್ರೀಮತಿ ಸರಸ್ವತಿ ಟೀಚರ್ ರಿಂದ ಶುಭಾಶಂಸನೆ

ಮುಖ್ಯ ಶಿಕ್ಷಕ ಶ್ಯಾಮ ಭಟ್ ರಿಂದ ಅಧ್ಯಕ್ಷೀಯ ಭಾಷಣ


ಧನ್ಯವಾದ ಸಮರ್ಪಣೆ-ರವಿ ಕುಮಾರ್ ರಿಂದ
ಗಣಿತದ ಅಳತೆಗನುಸಾರ ಮಾದರಿ ತಯಾರಿ

ಆಸಕ್ತಿಯಿಂದ ಕಲಿಯುತ್ತಿರುವ ವಿದ್ಯಾರ್ಥಿಗಳು

ವಿದ್ಯಾರ್ಥಿಗಳಿಂದ ಬ್ಯಾಜ್ ನಿರ್ಮಾಣ

ತಾವೇ ತಯಾರಿಸಿದ ಬ್ಯಾಜ್ ಧರಿಸಿ ಹೆಮ್ಮೆ ಪಟ್ಟ ಮಕ್ಕಳು

ಎಲ್.ಪಿ.ವಿಭಾಗದ ವಿದ್ಯಾರ್ಥಿಗಳು ವಿವಿಧ ವಸ್ತುಗಳ ನಿಖರ ತೂಕ ಕಂಡು ಹಿಡಿಯುತ್ತಿರುವುದು

Wednesday, February 18, 2015

AWARDS

ಪೈವಳಿಕೆ ಪಂಚಾಯತು ಮಟ್ಟದ ಯು.ಪಿ.ವಿಭಾಗದ ವಿಜ್ಞಾನ ಸೆಮಿನಾರಿನಲ್ಲಿ ಪ್ರಥಮ ಸ್ಥಾನ ಪಡೆದ 7ನೇ ತರಗತಿಯ ವಿದ್ಯಾರ್ಥಿಗಳು
ADARSH P V,KSHITHEESHA C S,BINDU.S,VIDYASHREE.B

INVITATION



Thursday, February 12, 2015

ಮಾಯಿಪ್ಪಾಡಿ ಶಿಕ್ಷಕ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ

ಮಾಯಿಪ್ಪಾಡಿ ಶಿಕ್ಷಕ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ
ಶಿಕ್ಷಕ ವಿದ್ಯರ್ಥಿನಿ ಜ್ಯೋತಿಯವರ ಅನಿಸಿಕೆ


ಶಿಕ್ಷಕಿ ರಾಜೇಶ್ವರಿಯವರಿಂದ ಶುಭ ಹಾರೈಕೆ

ಹಿರಿಯ ಅಧ್ಯಾಪಕಿ ಸರಸ್ವತಿ ಯವರಿಂದ ಮಾರ್ಗ ದರ್ಶನ

ಪುಟಾಣಿ ಪೂರ್ಣಿಮಾಳಿಂದ ಅನಿಸಿಕೆ

ಪುಟಾಣಿ ಗೌತಮ್ ನಿಂದ ಅನಿಸಿಕೆ

ಮುಖ್ಯ ಶಿಕ್ಷಕ ಶ್ಯಾಮ ಭಟ್ ರಿಂದ ಅಧ್ಯಕ್ಷೀಯ ಭಾಷಣ