Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Saturday, December 23, 2017

Learning Camp

ಚೇವಾರಿನಲ್ಲಿ ಶ್ರದ್ಧಾ- ಮಧುರ ಕನ್ನಡ ಕಲಿಕಾ ಶಿಬಿರದ ಉದ್ಘಾಟನೆ

ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರದ್ಧಾ- ಮಧುರ ಕನ್ನಡ ಕಲಿಕಾ ಶಿಬಿರವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ನೂರುದ್ದೀನ್ ಮುಬಾರಕ್ ಉದ್ಘಾಟಿಸಿದರು.ಕಲಿಕೆಯಲ್ಲಿ ಏಕಾಗ್ರತೆ ಹೆಚ್ಚಿಸಿ,ಆಸಕ್ತಿಯನ್ನುಂಟುಮಾಡುವಲ್ಲಿ ಇಂತಹ ಶಿಬಿರಗಳು ಸಹಕಾರಿ ಎಂದು ಅಭಿಪ್ರಾಯ ಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಶ್ಯಾಮ್ ಭಟ್ ವಹಿಸಿ,ಈ ವಿಶೇಷ ಯೋಜನೆಯ ರೂಪುರೇಷೆಯನ್ನು ವಿವರಿಸಿದರು.ಮುಖ್ಯ ಅತಿಥಿ,ಮಾತೃ ರಕ್ಷಕ ಶಿಕ್ಷಕ ಸಂಘದ ಸದಸ್ಯೆ ಶಶಿಕಲಾ ಶುಭ ಹಾರೈಸಿದರು.ಶಿಕ್ಷಕಿ ಪ್ರಮೀಳಾ ಪ್ರಾರ್ಥನೆ ಹಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ರಾಜೇಶ್ವರಿ.ಬಿ,ಸರಸ್ವತಿ.ಬಿ,ತರಗತಿ ನಡೆಸಿದರು.ರವಿಕುಮಾರ್ ಸ್ವಾಗತಿಸಿದರು.ಪುಷ್ಪಲತಾ ವಂದಿಸಿದರು. ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

Thursday, December 7, 2017

Some Malayalam newspaper cuttings about District and Sub district Kalolsava winners

 


Sunday, November 12, 2017

Winner

ಪ್ರತಿಭಾನ್ವಿತರು


ಉಪ್ಪಳ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ,ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ,ಸಂಸ್ಕೃತ ನಾಟಕದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ದೃಶ್ಯ ಕಿರಣ್.ಎಸ್.ಇವನು ಸುಬ್ಬಯ್ಯಕಟ್ಟೆ ಕಮಲಾಕ್ಷ ಹಾಗೂ ಪುಷ್ಪಾ ದಂಪತಿ ಪುತ್ರ

Kalothsava winners

ಪ್ರತಿಭಾನ್ವಿತರು

ಉಪ್ಪಳ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ,ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ,ಸಂಸ್ಕೃತ ನಾಟಕದಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಸುಕೇಶ,ಬಿ,ಚೈತನ್ಯ.ಯಂ.,ತೇಜಶ್ರೀ.ಸಿ.ಎಚ್,

ಹರ್ಷಿತಾ. ಸಿ.ಎಚ್,ಪೂರ್ಣಿಮಾ.ಕೆ.ಯಂ.,ಗೌತಮ್ ಎಸ್,ದೃಶ್ಯ ಕಿರಣ್.ಎಸ್,ಚಿನ್ಮಯಿ.ಎಸ್,ಧನುಷ್ ಮತ್ತು ಶ್ರಾವಣ್.

Wednesday, October 11, 2017

VACCINATION


ರುಬೆಲ್ಲಾ ಪ್ರತಿರೋಧ ಚುಚ್ಚುಮದ್ದು ಶಿಬಿರ 11-10-2017ರಂದು ಶಾಲೆಯಲ್ಲಿ ಜರಗಿತು.

Thursday, August 17, 2017

INDEPENDENCE DAY CELEBRATION



ಚೇವಾರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 71ನೇ ಸ್ವಾತಂತ್ರ್ಯೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಪೈವಳಿಕೆ ಪಂಚಾಯತಿನ ಸದಸ್ಯರಾದ ಹರೀಶ್ ಬೊಟ್ಟಾರಿ ಧ್ವಜಾರೋಹಣಗೈದರು.ಮಾಜಿ ಪಂಚಾಯತ್ ಅಧ್ಯಕ್ಷರಾದ ಅಚ್ಯುತ ಚೇವಾರ್ ಶುಭ ಹಾರೈಸಿದರು.

ಬಹುಮಾನ ವಿತರಣೆ


 ಸಾಂಸ್ಕೃತಿಕ ಕಾರ್ಯಕ್ರಮ-ವಿದ್ಯಾರ್ಥಿಗಳಿಂದ



Wednesday, July 12, 2017

PTA GENERALBODY MEETING INVITATION



ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
ಅಂಚೆ: ಕುಡಾಲುಮೇರ್ಕಳ
ಮಾನ್ಯರೇ,
ನಮ್ಮ ಶಾಲಾ PTA/MPTA/SMC/NMP ಸದಸ್ಯರ ಮಹಾ
ಸಭೆಯು ದಿನಾಂಕ 18-7-2017 ನೇ ಮಂಗಳವಾರ ಅಪರಾಹ್ನ
2 ಗಂಟೆಗೆ ಸರಿಯಾಗಿ ಚೇವಾರು ಶಾಲೆಯಲ್ಲಿ ಕರೆಯಲಾಗಿದೆ.
ಸಭೆಗೆ ತಮ್ಮ ಆಗಮನವನ್ನು ಅಪೇಕ್ಷಿಸಲಾಗಿದೆ.
ಕಾರ್ಯಕ್ರಮಗಳು:-
Ø  ವಾರ್ಷಿಕ ಮಹಾ ಸಭೆ-ನೂತನ ಪದಾಧಿಕಾರಿಗಳ ಆಯ್ಕೆ.
Ø  ವರದಿ-ಆಯವ್ಯಯ ಮಂಡನೆ.
Ø  ಇಂಗ್ಲಿಷ್-ಗಣಿತ ವಿಶೇಷ ತರಗತಿಗಳ ಉದ್ಘಾಟನೆ.


ಸ್ಥಳ: ಚೇವಾರು
ತಾ: 11-7-2017                         ಸಂಚಾಲಕರು


ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
ಅಂಚೆ: ಕುಡಾಲುಮೇರ್ಕಳ
ಮಾನ್ಯರೇ,
ನಮ್ಮ ಶಾಲಾ PTA/MPTA/SMC/NMP ಸದಸ್ಯರ ಮಹಾ
ಸಭೆಯು ದಿನಾಂಕ 18-7-2017 ನೇ ಮಂಗಳವಾರ ಅಪರಾಹ್ನ
2 ಗಂಟೆಗೆ ಸರಿಯಾಗಿ ಚೇವಾರು ಶಾಲೆಯಲ್ಲಿ ಕರೆಯಲಾಗಿದೆ.
ಸಭೆಗೆ ತಮ್ಮ ಆಗಮನವನ್ನು ಅಪೇಕ್ಷಿಸಲಾಗಿದೆ.
ಕಾರ್ಯಕ್ರಮಗಳು:-
Ø  ವಾರ್ಷಿಕ ಮಹಾ ಸಭೆ-ನೂತನ ಪದಾಧಿಕಾರಿಗಳ ಆಯ್ಕೆ.
Ø  ವರದಿ-ಆಯವ್ಯಯ ಮಂಡನೆ.
Ø  ಇಂಗ್ಲಿಷ್-ಗಣಿತ ವಿಶೇಷ ತರಗತಿಗಳ ಉದ್ಘಾಟನೆ.


ಸ್ಥಳ: ಚೇವಾರು
ತಾ: 11-7-2017                         ಸಂಚಾಲಕರು

CLUBS INAUGURATION,2017

ಚೇವಾರಿನಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆ


ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳ ಉದ್ಘಾಟನಾ ಸಮಾರಂಭ ಜರಗಿತು.ಸ್ಟಾಫ್ ಕಾರ್ಯದರ್ಶಿ,ಚೇವಾರು ವಿನೋದ ಅಧ್ಯಕ್ಷತೆವಹಿಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಕ್ಲಬ್ ಗಳನ್ನು ಉದ್ಯಾಟಿಸಿ,ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಕರೆಕೊಟ್ಟರು.ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಪೋಷಿಸುವಲ್ಲಿ ಕ್ಲಬ್ ಚಟುವಟಿಕೆಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾದ ಕಲಾ ಶಿಕ್ಷಕ ಪ್ರಕಾಶ್, ಶುಭ ಹಾರೈಸಿದರು.ಶಿಕ್ಷಕರಾದ ರವಿಕುಮಾರ್,ವಿಜಯನ್,ಪ್ರಮೀಳಾ ಡಿ.ಎನ್.ಕ್ಲಬ್ ಸದಸ್ಯರ ಹೆಸರನ್ನು ಘೋಷಿಸಿ,ಚಟುವಟಿಕೆಗಳನ್ನು ವಿವರಿಸಿದರು. ಪುಷ್ಪಲತಾ.ಕೆ.ವಿ ಸ್ವಾಗತಿಸಿದರು.ರಾಜೇಶ್ವರಿ.ಬಿ.ವಂದಿಸಿದರು.ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

WORLD POPULATION DAY CELEBRATION,2017


ಚೇವಾರಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನವನ್ನುವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಸ್ಟಾಫ್ ಕಾರ್ಯದರ್ಶಿ,ಚೇವಾರು ವಿನೋದ ಅಧ್ಯಕ್ಷತೆವಹಿಸಿ,ಜನಸಂಖ್ಯಾ ನಿಯಂತ್ರಣ ಮಾಡುವ ಅಗತ್ಯತೆಯ ಕುರಿತು ತಿಳಿಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಉದ್ಘಾಟಿಸಿ,ಉತ್ತಮ ಸಮಾಜವನ್ನು,ಒಳ್ಳೆಯ ಆರೋಗ್ಯವನ್ನು ಪಡೆಯ ಬೇಕಾದರೆ,ಜನಸಂಖ್ಯಾನಿಯಂತ್ರಣವನ್ನು ಪಾಲಿಸ ಬೇಕಾಗಿದೆ,ಇರುವ ಜನರನ್ನು ದೇಶದ ಶಕ್ತಿಯಾಗಿಸಬೇಕೆಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾಗಿ ಕಲಾ ಶಿಕ್ಷಕ ಪ್ರಕಾಶ್.ಶಿಕ್ಷಕರಾದ ರವಿಕುಮಾರ್,ವಿಜಯನ್,ಪ್ರಮೀಳಾ ಡಿ.ಎನ್. ಪುಷ್ಪಲತಾ.ಕೆ.ವಿ ಮಾತನಾಡಿದರು.ಈ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಮಂಡನೆ ಏರ್ಪಡಿಸಲಾಯಿತು.ಪ್ರಸಾದ್ ರೈ ಸ್ವಾಗತಿಸಿದರು.ರಾಜೇಶ್ವರಿ.ಬಿ.ವಂದಿಸಿದರು

Thursday, July 6, 2017

ಶಾಲಾ ತೋಟಕ್ಕೆ ಔಷಧೀಯ ಗಿಡದ ಕೊಡುಗೆ

7ನೇ ತರಗತಿಯ ಗೌತಮ್.ಎಸ್ ನ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ತೋಟಕ್ಕೆ ಔಷಧೀಯ ಗಿಡದ ಕೊಡುಗೆ

7ನೇ ತರಗತಿಯ ನವ್ಯಶ್ರೀ ಯಂ.ಆರ್ ಳ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ತೋಟಕ್ಕೆ ಹೂ ಗಿಡದ ಕೊಡುಗೆ

Wednesday, June 21, 2017

INTERNATIONAL YOGA DAY CELEBRATION,2017-18

ಚೇವಾರು ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ


ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನದ ಅಂಗವಾಗಿ,ಯೋಗಾಸನ ಶಿಬಿರವನ್ನು ಏರ್ಪಡಿಸಲಾಯಿತು.ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಮಿತ್ತಡ್ಕ,ಅವರು, ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ,ಅದನ್ನು ಕಾಪಾಡುವ ನಿಟ್ಟಿನಲ್ಲಿ ಯೋಗಾಭ್ಯಾಸ ಸಹಕಾರಿಯಾಗಿದೆ,ಎಂದು ಅಭಿಪ್ರಾಯಪಟ್ಟರು.ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ರೇಖಾ ಗೋಪಾಲಕೃಷ್ಣ ಭಟ್ ಕಟ್ಟದಮನೆ ಅವರು ಭಾಗವಹಿಸಿ ಯೋಗ ಶಿಬಿರವನ್ನು ನಡೆಸಿಕೊಟ್ಟರು.ಪ್ರಭಾರ ಮುಖ್ಯ ಶಿಕ್ಷಕಿ ಸರಸ್ವತಿ.ಬಿ.ಅಧ್ಯಕ್ಷತೆವಹಿಸಿದರು.ಸ್ಚಾಫ್ ಕಾರ್ಯದರ್ಶಿ ವಿನೋದ್ ಚೇವಾರ್ ಶುಭ ಹಾರೈಸಿದರು.ಪ್ರಮೀಳಾ ಸ್ವಾಗತಿಸಿದರು.ಶಿಕ್ಷಕ ರವಿಕುಮಾರ್ ವಂದಿಸಿದರು.ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.