Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, September 26, 2016

AWARDS

ಹೆದ್ದಾರಿ ಎ.ಯು.ಪಿ.ಶಾಲೆಯಲ್ಲಿ ಜರಗಿದ 2 ದಿನಗಳ ಸಂಸ್ಕೃತ ಶಿಬಿರದಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ ಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳು.


Monday, September 19, 2016

SCHOOL GARDEN



HELPING HAND

ಚೇವಾರಿನಲ್ಲಿ ಜೀವ ಕಾರುಣ್ಯಪದ್ಧತಿ ಅಂಗವಾಗಿ ಓಣಂ ಕಿಟ್ ವಿತರಣೆ




ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬಾಚರಣೆಯ ಅಂಗವಾಗಿ,ಶಾಲಾ ವಿದ್ಯಾರ್ಥಿಗಳಿಂದ,ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಓಣಂ ಕಿಟ್ ಗಳನ್ನು ವಿತರಿಸಲಾಯಿತು.ಕಾರ್ಯಕ್ರಮವನ್ನು ಪೈವಳಿಕೆ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಭಾರತಿ.ಜೆ,ಶೆಟ್ಟಿ ಉಧ್ಘಾಟಿಸಿ,ಕಿಟ್ ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಪೈವಳಿಕೆ ಪಂಚಾಯತು ಸದಸ್ಯರಾದ ಹರೀಶ್ ಬೊಟ್ಟಾರಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕುಮಾರ ಸುಬ್ರಹ್ಮಣ್ಯ, ಶಾಲಾ ಮುಖ್ಯ ಶಿಕ್ಷಕರಾದ ಶ್ಯಾಮ ಭಟ್ ಉಪಸ್ಥಿತರಿದ್ದರು.

EMPOWERMENT CAMP IN ENGLISH & MATHS



ಚೇವಾರಿನಲ್ಲಿ ಇಂಗ್ಲಿಷ್-ಗಣಿತ ಸಬಲೀಕರಣ ಶಿಬಿರ

ಪಂಚಾಯತು ಅಧ್ಯಕ್ಷೆ ಶ್ರೀಮತಿ ಭಾರತಿ.ಜೆ.ಶೆಟ್ಟಿಯವರಿಂದ ಉದ್ಘಾಟನೆ

ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಪುಟಾಣಿಗಳು

ಚೇವಾರು ವಾರ್ಡ್ ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರಿಂದ ಶುಭಾಶಂಸನೆ

ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ, ಪೈವಳಿಕೆ ವಿದ್ಯುತ್ ಶಕ್ತಿ ನಿಗಮದ ಸಬ್ ಇಂಜಿನಿಯರ್ ಶ್ರೀ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಅವರಿಂದ ಶುಭಾಶಂಸನೆ


ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್-ಗಣಿತ ಸಬಲೀಕರಣ ಶಿಬಿರವು ಶಾಲಾ ಸಭಾಂಗಣದಲ್ಲಿ ಜರಗಿತು.ಶಿಬಿರವನ್ನು ಪೈವಳಿಕೆ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಭಾರತಿ.ಜೆ,ಶೆಟ್ಟಿ ಉಧ್ಘಾಟಿಸಿದರು. ಮಕ್ಕಳನ್ನು,ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಹೊಂದಿಕೊಳ್ಳುವಂತೆ ಮಾಡಲು ಇಂತಹ ಶಿಬಿರಗಳು ಪೂರಕ ಎಂದು ಅಭಿಪ್ರಾಯಪಟ್ಟರು. ಸಭೆಯ ಅಧ್ಯಕ್ಷ ಸ್ಥಾನ ವಹಿಸಿ,ಮಾತನಾಡಿದ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕುಮಾರ ಸುಬ್ರಹ್ಮಣ್ಯ,ಮಕ್ಕಳು ಇಂತಹ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ,ಶಿಬಿರವನ್ನು ಸದುಪಯೋಗಪಡಿಸಬೇಕೆಂದು ಕರೆಕೊಟ್ಟರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿರುವ ಪೈವಳಿಕೆ ಪಂಚಾಯತು ಸದಸ್ಯರಾದ ಹರೀಶ್ ಬೊಟ್ಟಾರಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕರಾದ ಶ್ಯಾಮ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.ಸಂಪನ್ಮೂಲ ವ್ಯಕ್ತಿಗಳಾದ ಸರಸ್ವತಿ.ಬಿ.ವಿನೋದ್ ಚೇವಾರ್,ರಾಜೇಶ್ವರಿ.ಬಿ.ರವಿಕುಮಾರ್,ಪ್ರಸಾದ್ ರೈ,ಪ್ರಮೀಳಾ,ಪುಷ್ಪಲತ ಶಿಬಿರವನ್ನು ನಡೆಸಿಕೊಟ್ಟರು.ರವಿಕುಮಾರ್ ವಂದಿಸಿದರು.ವಿನೋದ್ ಚೇವಾರ್ ಕಾರ್ಯಕ್ರಮವನ್ನು ನಿರೂಪಿಸಿದರು.ವಿಜಯನ್,ಗೋಪಾಲಕೃಷ್ಣ ಭಟ್ ಸಹಕರಿಸಿದರು.

Sunday, September 18, 2016

ONAM FESTIVAL CELEBRATION-2016-17



ಶಾಲೆಯಲ್ಲಿ ಓಣಂ ಸಂಭ್ರಮ
ವಿದ್ಯಾರ್ಥಿಗಳಿಂದ ಹೂವಿನ ರಂಗವಲ್ಲಿ ರಚನೆ
ವಿವಿಧ ವೇಷಧಾರಿ ಪುಟಾಣಿಗಳು

ಓಣಂ ಭೋಜನ

ಚೇವಾರಿನಲ್ಲಿ ಓಣಂ ಆಚರಣೆ

ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಮಿತ್ತಡ್ಕ ಕಾರ್ಯಕ್ರಮ ಉದ್ಘಾಟಿಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್,ಹಬ್ಬಗಳನ್ನು ಆಚರಿಸುವ ಮೂಲಕ,ಸಮಾಜದಲ್ಲಿ ಶಾಂತಿ,ಸಹಬಾಳ್ವೆ,ಸಾಮರಸ್ಯ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮ,ಸಡಗರದಿಂದ ವೈವಿಧ್ಯಪೂರ್ಣವಾಗಿ ಆಚರಿಸಲಾಯಿತು.ವಿಶೇಷ ಎಸೆಂಬ್ಲಿ ನಡೆಸಿ ಹಬ್ಬದ,ಹಿನ್ನೆಲೆ,ಮಹತ್ವವನ್ನು ವಿವರಿಸಲಾಯಿತು.
ಎಲ್ಲಾ ತರಗತಿಗಳಲ್ಲಿ,ವಿದ್ಯಾರ್ಥಿ,ವಿದ್ಯಾರ್ಥಿನಿಯರು,ಆಕರ್ಷಕವಾದ ಪೂಕಳಂನ್ನು ರಚಿಸಿದರು.ಇದೇ ಸಮಯದಲ್ಲಿ ಮಹಾಬಲಿ ಚಕ್ರವರ್ತಿಯ ಆಗಮನವಾಯಿತು.ಇವರನ್ನು ಸ್ವಾಗತಿಸಲು,ಗೋಪಿಕಾಸ್ತ್ರೀಯರು,ಗೋಪಾಲಕರು,ಮೌಲ್ವಿಗಳು,ಸನ್ಯಾಸಿಗಳು,ಪಾದ್ರಿಗಳು,ನರಸಣ್ಣರು,ಆಟಿಕಳಂಜರು,ಯಕ್ಷರು,ಗಂಧರ್ವರ ಗಡಣವೇ ಶಾಲೆಯಲ್ಲಿ ಸೇರಿತ್ತು..ಮಹಾಬಲಿ ಚಕ್ರವರ್ತಿಯು , ಎಲ್ಲಾ ತರಗತಿಗಳಿಗೂ ಭೇಟಿಕೊಟ್ಟು ಕ್ಷೇಮ ಸಮಾಚಾರವನ್ನು ವಿಚಾರಿಸಿದರು ಹೂವಿನ ರಂಗವಲ್ಲಿಯ ಸುತ್ತಲೂ ,ಗೋಪಿಕಾ ಸ್ತ್ರೀಯರ ನೃತ್ಯ ಮನ ಮೋಹಕ ವಾಗಿತ್ತು..ತದನಂತರ, ಪಾಯಸ,ಲಡ್ಡು, ಹಣ್ಣುಹಂಪಲುಗಳನ್ನೊಳಗೊಂಡ ಓಣಂ ಔತಣವನ್ನು ಮಹಾಬಲಿ ಚಕ್ರವರ್ತಿಯೊಂದಿಗೆ ಎಲ್ಲರೂ ಸವಿದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
'ನಾವೆಲ್ಲರೂ ಒಂದೇ' ಎಂಬ ಸಂದೇಶದೊಂದಿಗೆ ಶೋಭಾಯಾತ್ರೆ