Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Friday, October 31, 2014

Indira Gandhi



ಅಕ್ಟೋಬರ್ 31: ಇಂದಿರಾ ಗಾಂಧಿ ಪುಣ್ಯ ಸ್ಮರಣೆ


ಭಾರತದ ಪ್ರಥಮ ಮಹಿಳಾ ಪ್ರಧಾನಿಯಾದ ಇಂದಿರಾ ಪ್ರಿಯ ದರ್ಶಿನಿ ಯವರು 1917ರನವೆಂಬರ್ 19ರಂದು ಅಲಹಾಬಾದಿನಲ್ಲಿ ಜನಿಸಿದರು.ತಂದೆ ಜವಾಹರಲಾಲ್ ನೆಹರು,ತಾಯಿ ಕಮಲಾ ನೆಹರು.ಇಂದಿರಾ ಎಳವೆಯಲ್ಲಿಯೇ ಬ್ರಿಟಿಷ್ ಪ್ರಭುತ್ವದ ವಿರುದ್ಧ ಬಂಡೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡರು.ಇವರ ನಾಯಕತ್ವದಲ್ಲಿ ಮೋಂಕೀ ಬ್ರಿಗೇಡ್ಎಂಬ ಮಕ್ಕಳ ಸೈನ್ಯ ರೂಪುಗೊಂಡಿತು.
1938ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯೆಯಾದರು.ಲಾಲ್ ಬಹದ್ದೂರ್ ಶಾಸ್ತ್ರಿಪ್ರಧಾನಿಯಾಗಿದ್ದ ಮಂತ್ರಿ ಮಂಡಲದಲ್ಲಿ,ಇಂದಿರಾ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು.ಇವರು ಗರೀಬೀ ಹಟಾವೋಎಂಬ ಘೋಷಣಾ ವಾಕ್ಯದೊಂದಿಗೆ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.ಉಗ್ರವಾದಿಗಳ ದಮನಕ್ಕಾಗಿ ಇಂದಿರಾ ಗಾಂಧಿ ಸೇನೆಯನ್ನು ಅಮೃತಸರ್ ಸ್ವರ್ಣ ಮಂದಿರದೊಳಗೆ ಹೊಗಿಸಿದ ಕಾರಣಕ್ಕಾಗಿ,ಸಿಖ್ ಧರ್ಮೀಯರು ಅಸಮಧಾನಗೊಂಡರು.1984ರ ಅಕ್ಟೋಬರ್ 31ರಂದು ಇಹಲೋಕ ತ್ಯಜಿಸಿದರು.

KERALA RAJYOTHSAVAM


ನವೆಂಬರ್ 1: ಕೇರಳ ರಾಜ್ಯೋತ್ಸವ

ಕೇರಳದ 14 ಜಿಲ್ಲೆಗಳು-
ಕಾಸರಗೋಡು             .ಮಲಪ್ಪುರಂ          ಇಡುಕ್ಕಿ                ಕೊಲ್ಲಂ
ಕಣ್ಣೂರು               .ಪಾಲಕ್ಕಾಡ್          ಕೋಟ್ಟಯಂ          ತಿರುವನಂತಪುರ
ಕೋಝಿಕ್ಕೋಡ್                  .ತ್ರಿಶ್ಶ್ಯೂರ್           ಆಲಪ್ಪುಳ
.ವಯನಾಡ್                .ಎರ್ನಾಕುಲಂ        .ಪತ್ತನಂತಿಟ್ಟ
ಚಿಕ್ಕ ಜಿಲ್ಲೆ-ಆಲಪ್ಪುಳ       ದೊಡ್ಡ ಜಿಲ್ಲೆ-ಪಾಲಕ್ಕಾಡ್
ಕೇರಳದ ಮಹನೀಯರು
ಕೇರಳದ ಗಾಂಧಿ- ಕೆ.ಕೇಳಪ್ಪನ್
ಕೇರಳದ ವಾಲ್ಮೀಕಿ-ವಳ್ಳತ್ತೋಳ್.ಎಸ್.ನಾರಾಯಣ ಮೆನನ್
ಕೇರಳದ ವ್ಯಾಸ-ಕೊಡುಂಗಲ್ಲೂರ್ ಕುಂಜಿ ಕುಟ್ಟನ್ ತಂಬುರಾನ್
ಕೇರಳದ ಪಾಣಿನಿ-ಎ.ಆರ್.ರಾಜ ರಾಜ ವರ್ಮ
ಕೇರಳದ ಕಾಳಿದಾಸ-ಕೇರಳ ವರ್ಮ ವಲಿಯ ಕೋಯಿ ತಂಬುರಾನ್
ಕೇರಳದ ತುಳಸಿ ದಾಸ-ವೆನ್ನಿ ಕುಲಂ ಗೋಪಾಲ ಕುರುಪ್
ಕೇರಳದ ಕೇಸರಿ-ಎ.ಬಾಲ ಕೃಷ್ಣ ಪಿಳ್ಳೆ.
ಕೇರಳದ ಅತೀ ಎತ್ತರ ಶಿಖರ-ಆನೆ ಮುಡಿ                 
ಕೇರಳದ ಅತೀ ಉದ್ದವಾದ ನದಿ –ಪೆರಿಯಾರ್
ಕೇರಳದ ಅತೀ ದೊಡ್ಡ ಸರೋವರ-ವೆಂಬನಾಡ್
ಕೇರಳದ ಅತೀ ದೊಡ್ಡ ತಾಲೂಕು-ಎರನಾಡ್
ಕೇರಳದಲ್ಲಿರುವ ಜಿಲ್ಲೆಗಳ ಸಂಖ್ಯೆ-14


ಕೇರಳದಲ್ಲಿರುವ ತಾಲೂಕುಗಳು-63
ಕೇರಳದಲ್ಲಿರುವ ಕಾರ್ಪೋರೇಶನ್ ಗಳು-5
ಕೇರಳದಲ್ಲಿರುವ ಗ್ರಾಮ ಪಂಚಾಯತ್-991
ಕೇರಳದಲ್ಲಿರುವ ಬ್ಲಾಕ್ ಪಂಚಾಯತ್-152
ಕೇರಳದಲ್ಲಿರುವ ಮುನ್ಸಿಪಾಲಿಟಿಗಳು-53

ಕೇರಳದಲ್ಲಿರುವ ಎಸೆಂಬ್ಲಿ ಸೀಟುಗಳು-140

ಕೇರಳದಲ್ಲಿರುವ ಲೋಕ ಸಭಾ ಸೀಟುಗಳು-20

ಕೇರಳದಲ್ಲಿರುವ ರಾಜ್ಯ ಸಭಾ ಸೀಟುಗಳು-09

Vidyaranga Awards


ವಿದ್ಯಾರಂಗ ವಿಜೇತರು
ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿದ್ಯಾರಂಗದ,ಎಲ್.ಪಿ.ವಿಭಾಗದ ಒಗಟು ಸ್ಪರ್ಧೆಯಲ್ಲಿ 4ನೇ ತರಗತಿಯ ಗೌತಮ್ ಹಾಗೂ ಪೂರ್ಣಿಮಾ ದ್ವಿತೀಯ ,ಯು.ಪಿ.ವಿಭಾಗದ ಕವಿತಾ ರಚನೆಯಲ್ಲಿ 7ನೇ ತರಗತಿಯ ವಿದ್ಯಾಶ್ರೀ ತೃತೀಯ ಸ್ಥಾನ ಪಡೆದರು.

NATIONAL UNITY DAY CELEBRATION

ರಾಷ್ಟ್ರೀಯ ಐಕ್ಯತಾ ದಿನಾಚರಣೆ

 ಸರ್ದಾರ್ ವಲ್ಲಭ ಭಾಯಿ ಪಟೇಲರ ಜನ್ಮ ದಿನದಂಗವಾಗಿ ಅವರ ಭಾವ ಚಿತ್ರಕ್ಕೆ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಪುಷ್ಪಗಳನ್ನು ಅರ್ಪಿಸಿದರು.ಅವರ ಕುರಿತು ಅಧ್ಯಾಪಕರು ವಿವರಣೆ ನೀಡಿದರು.ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿದರು.೭ನೇ ತರಗತಿ ಕ್ಷಿತೀಶಾ ಪ್ರಥಮ,ಮೊಹಮ್ಮದ್ ಹಾಷಿರ್ ದ್ವಿತೀಯ ಸ್ಥಾನ ಪಡೆದರು.ಕ್ಷಿತೀಶಾ ಸ್ವಾಗತಿಸಿ,ಆದರ್ಶ ವಂದಿಸಿದನು.ಅಧ್ಯಾಪಕ ರವಿ ಕುಮಾರ್ ಕಾರ್ಯಕ್ರಮ ನೆರವೇರಿಸಿದರು.






 
ಪುಷ್ಪಾರ್ಚನೆ





Thursday, October 30, 2014

NATIONAL UNITY DAY


ಅಕ್ಟೋಬರ್:31,ರಾಷ್ಟ್ರೀಯ ಐಕ್ಯತಾ ದಿನ, ಸರ್ದಾರ್ ವಲ್ಲಭಬಾಯ್ ಪಟೇಲರ ಜನ್ಮ ದಿನ
Sardar Vallabha Bhai Patel



ಕ್ಕಿನ ಮನುಷ್ಯ ಎಂದೇ ಕರೆಯಲ್ಪಟ್ಟ  ಸರ್ದಾರ್ ವಲ್ಲಭಬಾಯ್ ಪಟೇಲ್ 1875ರ ಅಕ್ಟೋಬರ್ 31ರಲ್ಲಿ ಗುಜರಾತಿನ ನಾಡಿಮೇಡ್ ಎಂಬ ಗ್ರಾಮದಲ್ಲಿ ಜನಿಸಿದರು.
ವಲ್ಲಭಬಾಯ್ ಪಟೇಲರು ಬಾಲ್ಯದಿಂದಲೂ ಧೈರ್ಯ ಮತ್ತು ಸಂಘಟನಾ ಚಾತುರ್ಯಗಳನ್ನು ಹೊಂದಿದ್ದರು.ಅಹಮ್ಮದಾಬಾದಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಇವರು ಬಹು ಬಹೇಗ ಜನಪ್ರಿಯರಾದರು.1917ರಲ್ಲಿ ಅಹಮ್ಮದಾಬಾದಿನ ಸ್ಯಾನಿಟೇಶನ್ ಕಮಿಷನರ್ ಆಗಿ ಆಯ್ಕೆಯಾದರು. ಗಾಂಧೀಜಿಯವರ  ಚಂಪಾರಣ್ಯ ಸತ್ಯಾಗ್ರ ಹ  ದಿಂದ  ಪ್ರಭಾವಿತರಾಗಿದ್ದ ಪಟೇಲ್ 1918ರಲ್ಲಿ ಖೇಡಾ ಪ್ರಾಂತದ ರೈತರನ್ನು ಬರಗಾಲದಲ್ಲೂ ಬ್ರಿಟಿಷರಿಗೆ ಅಧಿಕ ತೆರಿಗೆ ಕಟ್ಟದಂತಿರಲು ಗಾಂಧೀಜಿಯವರೇ ಸೂಚಿಸಿದರು.ಪಟೇಲರಿಗೆ ಇದರ ಜವಾಬ್ದಾರಿಯನ್ನು ವಹಿಸಿದರು. ರೈತರಿಗೆ ನ್ಯಾಯ ಒದಗಿಸಿದರು.1930ರಲ್ಲಿ ಅಸಹಕಾರ ಆಂದೋಲನದಲ್ಲಿ ಭಾಗವಹಿಸಿ ಬಂಧಿತರಾದರು.1931ರ ಕರಾಚಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದರು.