Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Sunday, August 9, 2015

KAYYARA KINHIANNA RAI


ಶ್ರದ್ಧಾಂಜಲಿ
ಕಯ್ಯಾರ ಕಿಞಣ್ಣ ರೈ

ಕನ್ನಡದ ಕಟ್ಟಾಳು, ಪಂಪ ಪ್ರಶಸ್ತಿ ಪುರಸ್ಕೃತ,ಸ್ವಾತಂತ್ರ್ಯ ಹೋರಾಟಗಾರ,ಸಾಹಿತಿ,ನಾಡೋಜ ಕಯ್ಯಾರ ಕಿಞಣ್ಣ ರೈ,9-7-2015ರಂದು 101ನೇ ವಯಸ್ಸಿನಲ್ಲಿ ನಮ್ಮನ್ನಗಲಿರುವುದು ವಿಷಾದವನ್ನು ತಂದಿದೆ.ಕಯ್ಯಾರರು, ಶ್ರೇಷ್ಠ ಶಿಕ್ಷಕ,ಕೃಷಿಕ,ಸಂಘಟಕ,ಅನುವಾದಕ,ರಾಜಕಾರಣಿ,ಶಿಶು ಸಾಹಿತ್ಯಕಾರ,ಹೀಗೆ ಎಲ್ಲಾ ರಂಗಗಳಲ್ಲೂ ಗುರುತಿಸಿಕಂಡವರು.ಕಾಸರಗೋಡನ್ನು ಅನ್ಯಾಯವಾಗಿ ಕೇರಳಕ್ಕೆ ಸೇರಿಸಿದುದರ ವಿರುದ್ಧ ನಿಂದ ಕೈಯಾರರು,ಬೆಂಕಿ ಬಿದ್ದಿದೆ ಮನೆಗೆ,ಓ ಬೇಗ ಬನ್ನಿ ಎಂದು ಕೂಗಿ ಕರೆಯುವ ಬಗ್ಗೆ ಕವಿತೆ ರಚಿಸಿ ಕನ್ನಡಿಗರನ್ನು ಎಚ್ಚರಿಸಿದರು.
ಕಯ್ಯಾರರರು ಒಬ್ಬ ಕನ್ನಡದ ಕಾವಲು ಯೋಧನಾಗಿದ್ದವರು.ಇವರಿಗೆ ಲಭಿಸಿದ ಪ್ರಶಸ್ತಿಗಳು ಅನೇಕ.1961ರಲ್ಲಿ ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ,1969ರಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕಾರ,19963ರಲ್ಲಿ ಪುನರ್ನವ ಕವನ ಸಂಕಲನಕ್ಕೆ ಮೈಸೂರು ಸರಕಾರದಿಂದ ಉತ್ತಮ ಕವಿತಾ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ರತತ್ನ ರಾಶಿ ಗ್ರಂಥಕ್ಕೆ ಉತ್ತಮ ಜೀವನ ಚರಿತ್ರೆ ಪ್ರಶಸ್ತಿ,1985ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಗೌರವ,ಹಂಪಿ ವಿಶ್ವ ವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ,ಕರ್ನಾಟಕ ಸರಕಾರದಿಂದ ಪಂಪ ಪ್ರಶಸ್ತಿಗಳು ಲಭಿಸಿವೆ.
ಕಯ್ಯಾರ ಕಿಞಣ್ಣ ರೈಯವರ ಆತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ನೀಡಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ

No comments:

Post a Comment